ವಚನ - 1591     
 
ಓದಿದ ಫಲ ಕೂಚಭಟ್ಟನಂತಾಗಬಾರದು. ಓದಿದ ಫಲ ಪರಾಶರನಂತಾಗಬಾರದು. ಓದಿದ ಫಲ ಮಯೂರನಂತಾಗಬಾರದು. ಓದಿದ ಫಲ ನಮ್ಮ ಹಾವಿಹಾಳ ಕಲ್ಲಯ್ಯನ ಮನೆಯ ಶ್ವಾನನಂತಾಗಬೇಕು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.