ವಚನ - 1718     
 
ಮುಟ್ಟಿದರೆಂದು ಶಿರಮಟ್ಟ ನೀರು ಮುಟ್ಟಿದ ಬಳಿಕ ಬಟ್ಟಬಯಲಾದೆಯೇನಯ್ಯಾ, ಮನವೆ? ಮುಟ್ಟಬಾರದೆಂದು ಸಂಶಯ ತೋರ್ಪಡೆ, ಮುಟ್ಟಿದ ಎಲ್ಲಾ ದುರ್ಮಲ ಭಾಂಡ, ಮನವೆ. ಸಂಕಲ್ಪ ವಿಕಲ್ಪಂಗಳಳಿದು, ಬೆಟ್ಟಜಾಪತಿ ಕಪಿಲಸಿದ್ಧಮಲ್ಲಿಕಾರ್ಜುನನಾಗಿ ಬದುಕು, ಮನವೆ.