ವಚನ - 1816     
 
ನಾಗೇಶನ ತಿಳಿದೆವೆಂಬರು ಆನಾಗದೆ ಹೋದರು, ನಾಗಾಯಿ. ನಾಗಕುಂಡಲನರಿದೆವೆಂಬರು ನಾಗದೇವತೆಗಳಾದರು, ನಾಗಾಯಿ. ನಾಗಾಂಕನ ಅರಿದು ತಾನಾಗದೆ ನಾಗಕಂಕಣನಾದ, ನಾಗಾಯಿ, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.