ವಚನ - 1013     
 
ಒಂದೆರಡೆಂಬ ಸಂದೇಹಕ್ಕೊಳಗಾದವರೆಲ್ಲರೂ ಬಂದರು ನೋಡಾ ನಾನಾ ಭವದಲ್ಲಿ. ಕುಂದು ಹೆಚ್ಚಿನ ಹೋರಾಟದಿಂದ ಬಂಧನಕ್ಕೆ ಸಿಕ್ಕಿದರಲ್ಲ! ಒಂದೆರಡನೊಳಕೊಂಡು ನಿಂದ ನಿಲವ, ಸಂದಿಲ್ಲದೆ ಹೊಂದಿಪ್ಪ ಗುಹೇಶ್ವರ ತನ್ನಲ್ಲಿ.