ವಚನ - 1091     
 
ಕಾಯವ ಹೊತ್ತು ತಿರುಗಾಡುವನ್ನಬರ ನಾನರಿದೆನೆಂಬುದು ಹುಸಿಯಾಯಿತ್ತು. ಅರಿದಡೆ ತಾವರೆ ಎಲೆಯ ಬಿಂದುವಿನಂತೆ ಲೇಪವಿಲ್ಲದೆ ಗುಹೇಶ್ವರಲಿಂಗವನರಿಯಬೇಕು ಸಂಗನಬಸವಣ್ಣಾ.