ವಚನ - 1137     
 
ಕೋಪತಾಪವೆಂಬುದು ಅರಿವಿನೊಳಗೆ, ಭಕ್ತಿಯುಕ್ತಿ ಎಂಬುದು ನಿತ್ಯದೊಳಗೆ. ಭಾವದ ಬಗೆಗೆ ಬಣ್ಣವಿಟ್ಟುಕೊಂಡಡೆ ನಿರ್ಭಾವಿಕಂಗೆ ಅದು ಸಹಜವೆ? ಬಂದ ಶರಣರ ನಿಲವನರಿದು, ಸಂದುಸಂಶಯವಳಿದು ನಂಬದಿದ್ದಡೆ, ಹಿಂದು ಮುಂದಾಗಿ ಹೋಹನು ಕಾಣಾ ನಮ್ಮ ಗುಹೇಶ್ವರಲಿಂಗವು.