ವಚನ - 1202     
 
ತತ್ತ್ವವ ನುಡಿವ ಹಿರಿಯರೆಲ್ಲರು. ತುತ್ತನಿಕ್ಕುವರ ಬಾಗಿಲಲ್ಲಿ, ಅಚ್ಚುಗಪಡುತ್ತಿದ್ದರು ನೋಡಾ, ನಿತ್ಯಾನಿತ್ಯವ ಹೇಳುವ ಹಿರಿಯರು ತಮ್ಮ ಒಡಲ ಕಕ್ಕುಲತೆಗೆ ಹೋಗಿ, ಭಕ್ತಿಯ ಹೊಲಬನರಿಯದ, ಜಡಜೀವಿ ಮಾನವರ ಇಚ್ಛೆಯ ನುಡಿದು, ಹಲುಬುತ್ತಿಪ್ಪರು ನೋಡಾ! ಕತ್ತೆಗೆ ಕರ್ಪೂರವ ಹೇರಿದಂತೆ, ಅವರಿಗೆ ಇನ್ನೆತ್ತಣ ಮುಕ್ತಿಯೋ ಗುಹೇಶ್ವರಾ.