ವಚನ - 1561     
 
ಸಿದ್ಧರಾಮಯ್ಯನನುವ ನಿರ್ಬುದ್ಧಿ ಮನುಜರು ಎತ್ತಬಲ್ಲರೊ, ಸದ್ಯೋಜಾತವದನನೆ ಬಲ್ಲ. ಪಂಚಭೂತವ ಮಾಡಿದ ಘನಕ್ಕೆ ಘನವ ತೋರಿದ ಫಣಿಯ ಮಣಿಯ ತೊಡಗಿದ ಚತುರ್ದಶಭುವನದ ಹವಣನಾರು ಬಲ್ಲರೊ? ಒಳಗು ಹೊರಗುವ ತೋರಲಿಲ್ಲ! ಮನದ ಕೊನೆಯಲ್ಲಿ ಬೆಳಗುತಿಪ್ಪ ಗುಹೇಶ್ವರಲಿಂಗದಲ್ಲಿ ಸಿದ್ಧರಾಮಯ್ಯದೇವರು ತಾನೆ!