ವಚನ - 33     
 
ಅಜಲೋಕದೊಳಗಿಪ್ಪ ಬಹುಪರಿಯ ಕುಸುಮಕ್ಕೆ ಕರಂಗಳು ಬಂದು ಪೀಡಿಸುತ್ತಾ ಬಂಡುಂಬ ತುಂಬಿಯನು ಇಂಬಪ್ಪ ಕುಸುಮವನು ಸಂಭ್ರಮದಿ ನುಂಗಿತಾ ಜ್ಯೋತಿ ಬಂದು ಜ್ಯೋತಿಯನು ಸೂಕ್ಷ್ಮ ಸಿದ್ಧಿಯನು ಹಲವೆನಿಸಿ ರೀತಿಯಾದುದು ದೆಸೆಯ ಪ್ರಬಲಕಾಗಿ ಅಜಾತನ ರೀತಿವಿಡಿದವರೆಲ್ಲಾ ನಿತ್ಯರಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ.