ವಚನ - 39     
 
ಅತ್ತಲಿತ್ತ ಸುತ್ತಿ ಬಳಲಿ ವ್ಯರ್ಥವಪ್ಪ ಮನವ ನಿಮ್ಮ ಚಿತ್ತದತ್ತ ಧ್ಯಾನಿಸಿ ಇರಿಸಯ್ಯ. ಇನ್ನು ನಿಮ್ಮತ್ತಲಲ್ಲದೆ ಅತ್ತಲಿತ್ತ ಸುತ್ತಿ ಬಂದಡೆ ವಿಚಿತ್ರಮೂಲ ನಿಮ್ಮಾಣೆಯಯ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.