ವಚನ - 54     
 
ಅಭ್ಯಂತರದಲಿಪ್ಪ ಗಂಡ ಗುರುವಿನ ಅನುಮತದಿಂದ ಸರ್ವಾಂಗಕ್ಕೆ ಬಂದಾನು. ಮನೆಯನಿಂಬುಮಾಡು ಮದವಳಿಗೆ, ಮನವ ಶುದ್ಧವ ಮಾಡು ಮದವಳಿಗೆ, ಮನೆಯಲಿದ್ದೆರಡನೂ ಎಬ್ಬಟ್ಟವ್ವಾ. ಸಿದ್ಧ ಶುದ್ಧ ಪ್ರಸಿದ್ಧದಿಂದ, ದೀಕ್ಷೆ ಶಿಕ್ಷೆ ಸ್ವಾನುಭಾವದಿಂದ ಎಬ್ಬಟ್ಟಿ ಮನೆಯ ಮಂಗಳವ ಮಾಡವ್ವಾ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ಗಂಡ ಮನೆಯೊಳಕೆ ಬಂದು ಮತ್ತೊಬ್ಬರಿದ್ದಡೆ ಸೈರಿಸ.