ವಚನ - 62     
 
ಅಯ್ಯಾ, ಅನೇಕ ಪುರಾತರ ಅನುಮತದಿಂದ ಚೆನ್ನಬಸವಣ್ಣನೆನ್ನನಾಗುಮಾಡಿದ ಪರಿಯ ಹೇಳುವೆನಯ್ಯಾ. ಮುನ್ನಾದಿಯಲಾದ ಸ್ವಯಂಭುಜ್ಞಾನಮಂ ತಿಳುಪಿ ಆನಂದದ ಕರದಲ್ಲಿ ಇಟ್ಟು ಬಸವಾಕ್ಷರಸಂಯುತ ಧ್ಯಾನಮೌನಾದಿ ಸಮ್ಯಜ್ಞಾನವನರುಪಿದ ಗುರುಕರುಣದಿಂದ ಆನು ನೀನಾದೆನೈ ಕಪಿಲಸಿದ್ಧಮಲ್ಲಿಕಾರ್ಜುನಾ.