ವಚನ - 90     
 
ಅಯ್ಯಾ, ನೀ ನಿತ್ಯ ನಿತ್ಯ ನೀನೆಲೆ ಅಯ್ಯಾ, ನೀ ಸತ್ಯಶುದ್ಧದೇಹಿ ಕಾಣೆಲೆ ಅಯ್ಯಾ, ಅಯ್ಯಾ ನೀ ಕರುಣವುಳ್ಳ ಮಹಾಶ್ರಯ ಕಾಣೆಲೆ ಅಯ್ಯಾ, ಅಯ್ಯಾ ನೀನು ಭಕ್ತದೇಹಿಕ ದೇವನಾದ ಕಾರಣ ಒಲಿದೆ ಮಚ್ಚಿದೆ. ಒಲುಮೆಯೂ ಮಚ್ಚು ನಿಶ್ಚಯವೆಂದು ನಂಬಿದೆ ಗುರುವೆ, ಭವಪಾಶದೂರನೆ ಕಪಿಲಸಿದ್ಧಮಲ್ಲಿಕಾರ್ಜುನಾ.