ವಚನ - 111     
 
ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತೆ ಎಲೆ ಅಯ್ಯಾ, ನಿಮ್ಮ ಕಂಡು ಕಂಗಳು ಕಡೆಗೋಡಿವರಿದುವಯ್ಯಾ ಎನ್ನ ಮನಕ್ಕೆ ಮನ ವೇದ್ಯವಾದಡೆ ಕೈಮರದೆನೆಲೆ ಆಹಾ, ಅಯ್ಯಾ, ಕಪಿಲಸಿದ್ಧಮಲ್ಲಿನಾಥನ ಕಂಡ ಸುಖವು ಆರಿಗೆಯೂ ಇಲ್ಲ.