ವಚನ - 136     
 
ಆಜ್ಞಾಸಿದ್ಧನನರ್ಚಿಸುವ ಆನಂದಮಯ ಶರಣರ ಧ್ಯಾನ ಮೌನ ಸಮಾಧಿಗಳ[ದ್ಹೆಂ]ಗೆಂದೊಡೆ: ಪ್ರಸಾದವ ಬಯಸಿ ಪರವನರಿಯದಿಹುದೆ ಧ್ಯಾನ; ಶಿವನಲ್ಲದೆ ಅತಃಪರವಿಲ್ಲೆಂದು ಅನ್ಯರ ಕೂಡೆ ನುಡಿಯದಿಪ್ಪುದೆ ಮೌನ; ವ್ರತವಾರರಲ್ಲಿ ತದ್ಗತವಾಗಿಪ್ಪುದೀಗ ಸಮಾಧಿ, ಇಂತಪ್ಪುದೀಗ ಶಿವಯೋಗ. ಇಂತಪ್ಪವರ ತೋರು, ನಿನ್ನರ್ಚನೆಯನೊಲ್ಲೆ; ಅವರ ಗಡಣ ಸಂಗಮಾತ್ರದಲ್ಲಿ ನಿನ್ನ ಪದವಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.