ವಚನ - 155     
 
ಆದಿಮಧ್ಯಾವಸಾನವನರಿಯದೆ ನಾನು ಭಕ್ತ, ನಾನು ಜಂಗಮವೆಂದು ನುಡಿವ ಉದ್ದೇಶದ ಬರುಬಾಯ ಭುಂಜಕರ ನಾನೇನೆಂಬೆನಯ್ಯಾ. ಆದಿಯನರಿದಡೆ ಗುರುಕರಜಾತನೆಂಬೆ; ಮಧ್ಯವನರಿದಡೆ ಜಂಗಮಸಹಚಾರಿಯೆಂಬೆ; ಅವಸಾನವನರಿದಡೆ ಮಹಾಲಿಂಗೈಕ್ಯನೆಂಬೆ. ಇಂತೀ ತ್ರಿವಿಧವನರಿದಡೆ ತುರ್ಯನೆಂಬೆ. ಅರಿವರತು ಮರಹು ನಷ್ಟವಾದಡೆ ಕಪಿಲಸಿದ್ಧ ಮಲ್ಲಿಕಾರ್ಜುನದೇವರು ತಾನೆಂಬೆ.