ವಚನ - 167     
 
ಆನಂದದಗ್ನಿಯ ಆನು ತರಹೋದರೆ ಸಾಧಿಸಿದವಯ್ಯ ಎನ್ನ ಕರ್ಮಂಗಳು, ಭೇದಿಸಿದವಯ್ಯ ಎನ್ನ ಕರಣಂಗಳು, ಆಮೋದವಾದವಯ್ಯ ಎನ್ನ ಅವಯವಂಗಳು. ಆನಂದಸ್ಥಾನದ ಆದ್ಯಕ್ಷರಂಗಳ ಭೇದಿಸಿಹೆನೆಂದರೆ ಅದು ಸಾಧ್ಯವಿಲ್ಲ. ಆಧಾರದ ಆನತದ ಭೇದವನರಿದಾತ ಸಾಧಿಸಿದನೈ ಎನ್ನ ಕಪಿಲಸಿದ್ಧಮಲ್ಲೇಶ್ವರನ.