ಆನಂದದಗ್ನಿಯ ಆನು ತರಹೋದರೆ
ಸಾಧಿಸಿದವಯ್ಯ ಎನ್ನ ಕರ್ಮಂಗಳು,
ಭೇದಿಸಿದವಯ್ಯ ಎನ್ನ ಕರಣಂಗಳು,
ಆಮೋದವಾದವಯ್ಯ ಎನ್ನ ಅವಯವಂಗಳು.
ಆನಂದಸ್ಥಾನದ ಆದ್ಯಕ್ಷರಂಗಳ ಭೇದಿಸಿಹೆನೆಂದರೆ
ಅದು ಸಾಧ್ಯವಿಲ್ಲ.
ಆಧಾರದ ಆನತದ ಭೇದವನರಿದಾತ ಸಾಧಿಸಿದನೈ
ಎನ್ನ ಕಪಿಲಸಿದ್ಧಮಲ್ಲೇಶ್ವರನ.
Music
Courtesy:
Transliteration
Ānandadagniya ānu tarahōdare
sādhisidavayya enna karmaṅgaḷu,
bhēdisidavayya enna karaṇaṅgaḷu,
āmōdavādavayya enna avayavaṅgaḷu.
Ānandasthānada ādyakṣaraṅgaḷa bhēdisihenendare
adu sādhyavilla.
Ādhārada ānatada bhēdavanaridāta sādhisidanai
enna kapilasid'dhamallēśvarana.