ವಚನ - 231     
 
ಇಂತು ನಿನ್ನಯ ಭವದ ಚಿಂತೆಗೆಟ್ಟಿತು ಬ್ರಹ್ಮ ನಿಶ್ಚಿಂತನಾದೆನೈ, ಸಕಲದಲ್ಲಿ ವಸ್ತು ಹಲವನು ಜರಿದು ತತ್ತ್ವ ಮೂವತ್ತಾರ ವ್ಯರ್ಥವೆಂದೇ ಕಳೆದು, ಸುಚಿತ್ತದಿಂದಾ ಮತ್ತೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ತತ್ತ್ವ ತುರೀಯದೊಳಗೆ ಲೀಯವಾದೆ.