ವಚನ - 288     
 
ಎನ್ನ ತನುಮನದೊಡೆಯ ನೀನೆ ಕಂಡಯ್ಯಾ. ಮನದ ಮಹಾದೇವ ನೀನಾದ ಬಳಿಕ ಇನ್ನು ನಾ ಮನವ ಕದ್ದೆಲ್ಲಿ ಬೈಚಿಡುವೆನಯ್ಯಾ? ಎನ್ನ ಮನೋವಾಕ್ಕಾಯದೊಡೆಯ ನೀನೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಶರಣು ಶರಣು!