ವಚನ - 452     
 
ಕುಂಡಲಿ ಭ್ರೂಮಧ್ಯವನೊಂದಿನಿಂದು, ಪೂರ್ವ ಹೃದಯವ ಪೂರೈಸಿ, ಮಧ್ಯ ಹೃದಯವನವಗ್ರಹಿಸಿ, ಊರ್ಧ್ವಹೃದಯವನೊಡಗೂಡಿ, ಪಶ್ಚಿಮಚಕ್ರದಲ್ಲಿ ಪ್ರಾಣನಿವಾಸಿಯಾಗಿಪ್ಪನಾ ಶರಣ. ಓಂ ಮೂಲದ ಆ [ಪಶ್ಚಿಮ] ಶಿಖಾಚಕ್ರದಲ್ಲಿ ಮನೋಭಾವವಡಗಿ, ಸಹಸ್ರದಳ ಕಮಲದ ಬಯಲೊಳಗೆ ಬಯಲಾಗಿ, ನೀನು ತಾನಾದ ಚೆನ್ನಬಸವಣ್ಣನ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.