ವಚನ - 471     
 
ಖರಕರ ಕೋಟಿಪ್ರಭೆ ಪ್ರಭೆಯಂ ಮೀರಿಪ್ಪ ತೆರಹುಗೆಟ್ಟ ಸೀಮೆಯಲ್ಲಿ ಬಿಂದು ಭೇದವಾದ ಅಯ್ಯದಂದವನಾರು ಬಲ್ಲರು? ಆನಂದ ಸಚ್ಚಿದಾನಂದ ಸ್ಥಾನದಲ್ಲಿ ಶೂನ್ಯ ಕಾನನದೊಳಪ್ಪಿರವ್ವಾ ಅರಿವ ನಿನ್ನುವನು ಎಲೆ ಕುರುಹಿಲ್ಲದ ಸೀಮನೆ, ಕಪಿಲಸಿದ್ಧಮಲ್ಲಿಕಾರ್ಜುನನ ನೆನಹಿನ ಬ್ರಹ್ಮಾಂಡವಡಗುವವೆ ಅಯ್ಯಾ.