ವಚನ - 481     
 
ಗುರುವಾಜ್ಞೆಯ ಮೀರಿದೆನಾದಡೆ ಎನ್ನ ಸುಕೃತವೆಲ್ಲ ಕಿಲ್ಬಿಷವಾಗಲಿ ದೇವಾ. ಗುರುಸಂಜ್ಞೆಯ ಅರಿಯೆನಾದಡೆ, ಎನ್ನ ಬ್ರಹ್ಮಸಂಜ್ಞೆ ಬತ್ತಿಹೋಗಲಿ ದೇವಾ. ಗುರುದ್ವಾರವ ಕಾಯದಿದ್ದೆನಾದಡೆ ಎನ್ನ ಪಶ್ಚಿಮದ್ವಾರ ಸಿಗದೆ ಹೋಗಲಿ ದೇವಾ. ಗುರುಪುತ್ರರ ಗುರುವೆನ್ನದಿದ್ದೆನಾದಡೆ, ಯಮಗುಂಡು ನನಗಿರಲಿ, ಕಪಿಲಸಿದ್ಧಮಲ್ಲಿಕಾರ್ಜುನದೇವಾ.