ವಚನ - 527     
 
ಜನರ ಗೊತ್ತೆಂಬಲ್ಲಿ, ಪಾಪವ ಕಳೆದು ಪುಣ್ಯರಾಗಬೇಕೆಂಬರುಹು ತಲೆದೋರ್ಪುದಲ್ಲದೆ, ಭೋಗರಹಿತ ಪುಣ್ಯದಾಶೆಯಿಲ್ಲ. ಪುಣ್ಯದಾಶೆ ಇದ್ದಡೆ, ನಿಮ್ಮ ಲಿಂಗದಾಶೆ ಎನಗೆ ಸತ್ಯ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನಾ.