ವಚನ - 558     
 
ತತ್ವಮಸಿಯೆಂಬ ವೃಕ್ಷದ ಕೆಳಗೆ ದ್ವಯವಿಲ್ಲವೆಂದು ಏಕಏಕವೆಂದು ಆಡುತ್ತೈದಾನೆ. ಅದು ನಿತ್ಯಮುಕ್ತಿ, ಅದೆ ವಿಸ್ತಾರವೆಂದು ಆಡುತ್ತೈದಾನೆ. ಈಡಾ ದ್ವಾರಕ್ಕೆ ಹೋದಿರಾದಡೆ ನಾಲ್ವರ ಮೂಲ ನಾಶವ ಮಾಡಿ, ಅವ್ವೆಯ ಸರ್ವಾಂಗವಂ ಸೂರೆಗೊಂಡು ಕಪಿಲಸಿದ್ಧಮಲ್ಲಿಕಾರ್ಜುನಯ್ಯನೊಡಗೂಡಿದರೆ ಗಿರಿಯ ಮೇಲಣ ದುರ್ಗವಂ ಬಲ್ಲೆ.