ವಚನ - 573     
 
ತನುತ್ರಯದಲ್ಲಿ ಪ್ರವೇಶಿಸುವಾತ, ಮನತ್ರಯದಲ್ಲಿ ಸರ್ವಹಂತ, ಲೋಕ ಲೋಕಂಗಳೆಂಬಂಥ ಸೀಮೆಯಲ್ಲಿ ದಾತ ಸ್ವಾತಂತ್ರನೆ ತಾನೆ ಸಲೆಯಾರಾಧ್ಯವಾದಾತನೆಂದೆಂಬೆ. ಆತನೆ ಶರಣನೆಂದೆಂಬೆ, ಆತನೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬೆ.