ವಚನ - 650     
 
ದೇಶ ಪರಿಭಾಷೆಯಲ್ಲಿ ಅಸುರದ ಲಾಂಛನವ ಘಾಸಿಯಪ್ಪವರೆಲ್ಲರರಿಯಲಹುದೆ? ಸರ್ವೇಶ ಕಪಿಲಸಿದ್ಧಮಲ್ಲಿಕಾರ್ಜುನನ ಭಕ್ತಿಭಾಷೆ[ಯಾ]ದಂಗಲ್ಲದರಿಯಲಿಲ್ಲ.