ವಚನ - 676     
 
ನಸುನಗೆಯ ಢಾಳದಲ್ಲಿ ಎಸೆದಿಪ್ಪ ನನ್ನ ನಲ್ಲನೆ. ಹೊಸ ಕುಸುಮದ ಕಾಣಿಕೆಯ ತಂದೆನು; ಶಿಶುವೆಂದು ಮನ್ನಿಸಿದ ಶಿಶು ಸಸಿಯ ಫಲಕ್ಕೆ ಮೂಲಸ್ವಾಮಿಯಾಯಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.