ವಚನ - 678     
 
ನಾದ ಬಿಂದುವಿನಲ್ಲಿ ಆದಿಬ್ರಹ್ಮನ ಕೂಡಿ ವಾದ ಸಾದಾಖ್ಯಗಳನೊಡಗೂಡಿದ ಆನಂದ ತುಂಬಿಗಳ ಭೇದ ಭೇದಿಯ ಕೂಡಿ, ಮೋದ ಮೂವತ್ತಾರು ತತ್ತ್ವಂಗಳ ಭೇದಗಳ ಭೇದಿಸಿ, ಅಕ್ಷರದ್ವಯದಲ್ಲಿ ತಾನು ಸಂಗಮವಾದ ನಿಶ್ಚಯದಲಿ; ತವಕಿಸುವ ಕರಣವನು, ಹರಿವ ಪ್ರಪಂಚುವನು, ಒಸರುವ ಬಿಂದುವನು ಪಸರಿಸುವ ಭೇದವನು ದೆಸೆಗೆಟ್ಟು ಕಂಡೆ, ಕಪಿಲಸಿದ್ಧಮಲ್ಲೇಶ್ವರಾ.