ವಚನ - 741     
 
ಪಂಚೇಂದ್ರಿಯವೆಂಬ ಸೊಣಗ ಮುಟ್ಟದ ಮುನ್ನ ಮನ ನಿಮ್ಮನೆಯ್ದುವಂತೆ ಮಾಡಯ್ಯಾ. ಮೀಸಲು ಬೀಸರವೋಗದ ಮುನ್ನ ನೀ ನಿತ್ಯವಾಗಿ ಪ್ರಯೋಗಿಸಯ್ಯಾ. ಎನ್ನಾಸುರದ ಸ್ನೇಹವಿಂಗಿಹೋಗದ ಮುನ್ನ ಈಶನ ನೀ ಕೂಡಿಕೊಳ್ಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.