ವಚನ - 753     
 
ಪರುಷಲಿಂಗವ ಕೈಯಲ್ಲಿ ಹಿಡಿದು ಸ್ವರ ಫಲವನೀಯೆಂಬರು. ಶ್ರೀಗುರುಸ್ವಾಮಿ ಕರಸ್ಥಲಕಿತ್ತುದು ಹುಸಿಯೆ? ಇವಂದಿರು ಕೆಟ್ಟಕೇಡಿಂಗೆ ಕಡೆಯಿಲ್ಲ. ಮುಟ್ಟಿಯೂ ಮುಟ್ಟದವರನೇನೆಂಬೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.