ವಚನ - 824     
 
ಬ್ರಹ್ಮಾಂಡಂಗಳಿಂದತ್ತ [ತ್ತ] ಲಾದ ಆದ್ಯಕ್ಷರದ ಭೇದವ ಭೇದಿಸಿ ಸಾದಾಖ್ಯ ತತ್ತ್ವವನತಿಗಳೆದು ಶುದ್ಧ ಸಿದ್ಧ ಪ್ರಸಿದ್ಧ ಪಂಚಮಬ್ರಹ್ಮಕ್ಕೆ ಸೊಮ್ಮಾದ ಆರುವರ್ಣಂಗಳ ಐವತ್ತೆರಡಕ್ಷರದ ಆನಂದಸ್ಥಾನವ ಬಲ್ಲಾತ ಗುರು. ಇಪ್ಪತ್ತೈದಕ್ಷರದ ಹತ್ತೆ ಹೊದ್ದದಿಪ್ಪ ಪರಮಗುರುವೆ ನೀನು ಶಿಷ್ಯ ಕಾರಣ ಪರಶಿವಮೂರ್ತಿ ಗುರುರೂಪಾದೆ, ಕಪಿಲಸಿದ್ಧಮಲ್ಲಿಕಾರ್ಜುನಾ.