ವಚನ - 828     
 
ಭಕ್ತರ ನುಡಿ ಅಭವನಲ್ಲದೆ ಅನ್ಯವ ನುಡಿಯದು, ಅನ್ಯಕೆ ಎಡೆಯಾಗದು. ಆತನ ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ ಪಂಚೇಂದ್ರಿಯಂಗಳು ಆತನ ಐದು ಮುಖಂಗಳಯ್ಯಾ! ಆತ ಪತಿ, ಆತ ಸತಿ: ಆತನ ಕರಣಂಗಳೆಲ್ಲವು ಈಶನ ಉಪಕರಣಂಗಳು. ಆತನ ಕರಣಂಗಳೆಲ್ಲವು ಈಶನ ಹೇಮಶೈಲ. ಆತ ನಿತ್ಯವೂ ಲಿಂಗಾರ್ಚನೆಯ ಮಾಡುವ ಕಾರಣ, ಆತಂಗೊಂದೂ ಇದಿರಿಲ್ಲ; ಆತ ಲೋಕಕ್ಕೆ ಉಪದೇಶಿಕ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದ ತಾತ್ಪರ್ಯ ಭಕ್ತಿ.