ವಚನ - 848     
 
ಮಂಗಳದ ಸಂಗ ಅಂಗಕ್ಕೆ ಮಚ್ಚಿದುದ ಹಿಂಗಿ ಹೇಳಲ್ಕಿದಕೆ ಜಿಹ್ವೆಯುಂಟೆ? ಈರಾರು ಸುಖಗಳನು ಮೇಲಾದ ಮಧುರವನು ಓರಂತೆ ಉಂಡುದಕೆ ಪ್ರಳಯವುಂಟೆ? ನಿಗಮಂಗಳರಿಯದಿಹ ಅಗಣಿತ ಮೆಟ್ಟದಾ ಶ್ರುತಿಯ ತಪ್ಪಲಲಿರ್ದ ನಿತ್ಯತೃಪ್ತಾ ಮೂರಾರು ಈರಾರು ತೋರಿರ್ಪ ನಿಶ್ಚಯದ ಆರರಿಂದಂ ಮೇಲೆ ಸಂಯೋಗವು ಸ್ವಾನುಭಾವದ ದೀಕ್ಷೆ ತಾನು ತನಗಳವಟ್ಟು ಹೇಳದೆ ಹೋದನಾ ಇರ್ದ ಮನೆಗೆ ಮೂರನು ಮುಟ್ಟದೆ ಆರನು ತಟ್ಟದೆ ಮೀರಿ ಉರವಣಿಸಿದನು ಸಾಯುಜ್ಯದಾ ಫಲಪದವನತಿಗಳೆದು ನಿಗಮಕ್ಕಭೇದ್ಯನ ಕಂಡೆ ಕಪಿಲಸಿದ್ಧಮಲ್ಲಿಕಾರ್ಜುನಾ.