ವಚನ - 907     
 
ಮುನ್ನ ಶಿರಂಗಳ ಕೊಯಿದಿಕ್ಕಿ ನಿಮ್ಮ ಒಲವ ಕಾಣದೆ ಬೆರಗಾದುದು ಬೆನ್ನಹುರಿ ನವಸಿರಂಗಳೆಲ್ಲವ ಕೊಯ್ದು ತಂತಿಯ ಮಾಡಿ ಹಾಡಿದನಯ್ಯಾ. ಗೀತದಿಂದಲಿ ಒಲಿದು ಕೃತಾರ್ಥನ ಮಾಡಿದೆಯಯ್ಯಾ, ಎನ್ನ ಕಪಿಲಸಿದ್ಧಮಲ್ಲಿನಾಥ ದೇವರದೇವ.