ವಚನ - 953     
 
ರುದ್ರಂಗೆ ಪಾರ್ವತಿಯು, ವಿಷ್ಣುವಿಂಗೆ ಲಕ್ಷ್ಮಿಯು, ಬ್ರಹ್ಮಂಗೆ ಸರಸ್ವತಿಯು ಮತ್ತೆ ತೃಣದಶನದ ಫಲದ ಆಹಾರದವರ ಸುತ್ತಿ ಮುತ್ತಿತ್ತು ನೋಡಾ ಮಾಯೆ; ಸಪ್ತಧಾತುವ ಮೀರಿ ಪಂಚಭೂತವ ಜರಿದ ಶರಣರಿಗೋಡಿತ್ತು ಮಾಯೆ, ಕಪಿಲಸಿದ್ಧಮಲ್ಲಿಕಾರ್ಜುನಾ.