ವಚನ - 1034     
 
ಸಂಸಾರ ಭ್ರಮೆಯಿಂದಾಯಿತ್ತು ಅಜ್ಞಾನ, ಅಜ್ಞಾನದಿಂದಾಯಿತ್ತು ಅಹಂಮಮತೆ, ಅಹಂಮಮತೆಯಿಂದಾಯಿತ್ತು ಭವಬಂಧನ. ಈ ಭವಬಂಧನದ ಲಹರಿವಿಡಿದು, ಹರಿಸುರಬ್ರಹ್ಮಾದಿಗಳು ಜ್ಞಾನರತ್ನವ ನೀಗಿ, ಪ್ರಳಯಕ್ಕೊಳಗಾದರು, ಕಪಿಲಸಿದ್ಧಮಲ್ಲಿಕಾರ್ಜುನಾ