ವಚನ - 1066     
 
ಸಾಗರದ ಮಧ್ಯದ ಸಾಧಿಸುವ ಬಹಿರಂಗ ಆಗಮಂಗಳಿಗದು ಹೊರಗು ತಾನು. ಯೋಗಕ್ಕೆ ಮೂಲವದು, ಯೋಗಕ್ಕೆ ಸಿದ್ಧವದು, ಯೋಗಕ್ಕೆ ಅತ್ಯಂತ ಪರಮಸೀಮೆ. ಸಾದಾಖ್ಯ ತತ್ತ್ವದಲಿ ಸಂದು ಸವದರಿಗಿಲ್ಲ, ಅದ್ಯಕ್ಷರದ್ವಯದ ಪರಿಯಿಂತುಟು. ಮೂದೇವರೊಡೆಯ ಕಪಿಲಸಿದ್ಧಮಲ್ಲಿಕಾರ್ಜುನನ ಭೇದಿಸುವ ಯೋಗಿಯನು ಕಂಡು ನಗುವೆ.