ವಚನ - 1128     
 
ಹಾಡಿದರಿವರನು ಬೇಡಿದರಿವರನು. ಕೇಡಿಲ್ಲದಭವನ ನೆನೆಯಾ ಮನವೆ. ಕಣ್ಣಿಗೆ ತಿಮಿರ ಕವಿದು ಕವಿದು ಕರ್ಮದ ಬಲೆಗಳ ಸಿಲುಕದ ಮುನ್ನ ಸಕಲ ಜೀವಂಗಳಿಗೆ ಪ್ರಾಣನಿಸ್ತಾರಕ ಕಪಿಲಸಿದ್ಧಮಲ್ಲಿನಾಥಾ, ನೀ ಕೊಟ್ಟುದನರಿಯಾ.