ವಚನ - 1136     
 
ಹಿಡಿಗಟ್ಟಿಗೊಳಗಾದನೆಂಬ ಸುದ್ದಿಯ ಗುರು ಕೇಳಿದ. ಕೇಳಿ ಸೈರಿಸಲಾರದೆ ಕಂಡು ಕಂಡು, ಇರಿಸುವ ಠಾವಂ ತೋರಿದ. ಅಲ್ಲಲ್ಲಿಯಿದ್ದಡೆ ಎಲ್ಲಿಯೂ ಇರನೆಂದು ಅಜಲೋಕಕ್ಕೆ ಕಳುಹಿದ. ಅಜಲೋಕದಲ್ಲಿ ಆನಂದವೆಂಬ ಮನೆಯಲ್ಲಿ, ಭಕ್ತಿಯೆಂಬ ಬಂಧನವಂ ಮಾಡಿ, ಜ್ಞಾನವೆಂಬ ಕಾವಲಂ ಕೊಟ್ಟಿರಲಾಗಿ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಇನಿತು ಬಂಧನಕ್ಕೊಳಗಾದ.