ಹಿಡಿಗಟ್ಟಿಗೊಳಗಾದನೆಂಬ ಸುದ್ದಿಯ ಗುರು ಕೇಳಿದ.
ಕೇಳಿ ಸೈರಿಸಲಾರದೆ ಕಂಡು ಕಂಡು,
ಇರಿಸುವ ಠಾವಂ ತೋರಿದ.
ಅಲ್ಲಲ್ಲಿಯಿದ್ದಡೆ ಎಲ್ಲಿಯೂ ಇರನೆಂದು
ಅಜಲೋಕಕ್ಕೆ ಕಳುಹಿದ.
ಅಜಲೋಕದಲ್ಲಿ ಆನಂದವೆಂಬ ಮನೆಯಲ್ಲಿ,
ಭಕ್ತಿಯೆಂಬ ಬಂಧನವಂ ಮಾಡಿ,
ಜ್ಞಾನವೆಂಬ ಕಾವಲಂ ಕೊಟ್ಟಿರಲಾಗಿ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯ
ಇನಿತು ಬಂಧನಕ್ಕೊಳಗಾದ.
Music
Courtesy:
Transliteration
Hiḍigaṭṭidanemba suddiya guru kēḷida.
Kēḷi sairisalārade kaṇḍu kaṇḍu,
irisuva ṭhāvaṁ tōrida.
Alliddeḍe elliyū iranendu
ajalōkakke kaḷuhida.
Ajalōkadalli ānandavemba maneyalli,
bhaktiyemba bandhanavaṁ māḍi,
jñānavemba kāvalaṁ koṭṭiralāgi,
kapilasid'dhamallikārjunayya
initu bandhanakkoḷagāda.