ವಚನ - 1159     
 
ಹೊಲಮೇರೆಯಿಂ ಮೇರೆ ಹೊಲಬುದಪ್ಪಿದ ನಾದ ಕಳೆಗಳ ಮೀರಿರ್ದ ತುರ್ಯಂಗಳ, ಗುರುವಿನ ಕರುಣದ ಅನಿಮಿಷದ ಮನೆಯಲ್ಲಿ ಹೊಲಬುದಪ್ಪಿದ ಕಂಡೆ ಮಧ್ಯಮವನು. ಆನಂದಸ್ಧಾನದಲ್ಲಿ ಆಂದೋಳವಾಗಿಪ್ಪ ಮೂರರಕಳೆಗಳ ಭೇದಂಗಳ ಮೀರಲೀಯದ ಬ್ರಹ್ಮ, ತೋರಲೀಯದ ಸತ್ವ ನೀನಾದೆನೈ ಕಪಿಲಸಿದ್ಧಮಲ್ಲೇಶ್ವರಾ.