ವಚನ - 1162     
 
ಸಿದ್ಧಸಿದ್ಧರುಗಳೆಲ್ಲ ರಸವಾದವ ಕಲಿತು ಬಂಧನಕ್ಕೆ ಗುರಿಯಾದರು. ಅಮೃತವ ಸೇವಿಸಿದ ಸುರರೆಲ್ಲ ಪ್ರಳಯಕ್ಕೆ ಗುರಿಯಾದರು. ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಅರಿದವರೆಲ್ಲ ಬಯಲಿಗೆ ಬಯಲಾದರು.