ವಚನ - 1191     
 
ನಾಗೇಂದ್ರನ ವಿಷವನು, ಬ್ರಹ್ಮನ ಕಪಾಲವನು ಮತ್ತೊಬ್ಬರಿಗೆ ಹಿಡಿದು ತೀರುವುದೆ, ಎಲೆ ಅಯ್ಯಾ ? ಎತ್ತಿದಡೆ ಮೇಲೇಳುಲೋಕವನುರುಹುವುದು; ಇಳುಹಿದಡೆ ಕೆಳಗೇಳುಲೋಕವನುರುಹುವುದು; ಇವನೆತ್ತದೆ ಇಳುಹದೆ ಕೊಂಡಾಡುವ ದೇವ ನಮ್ಮ ಕಪಿಲಸಿದ್ಧಮಲ್ಲಿನಾಥಯ್ಯನೆ!