ವಚನ - 1229     
 
ಭಕ್ತನಾದ ಬಳಿಕ, ಅವರಿವರೆನ್ನದೆ ಮಾಡುವುದಯ್ಯಾ ಪ್ರಸಂಗವ. ಭಕ್ತನಾದ ಬಳಿಕ, ಅವರಿವರೆನ್ನದೆ ಶರಣೆಂದು ಮನ್ನಿಸುವುದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.