ವಚನ - 1276     
 
ಎಂದೋ ಎನಗೆ ಶಿವಪದ ಎಂದೋ ಎಂದು ಚಿಂತಿಸುವಂಗೆ ಮುಂದೆ ತೋರುತ್ತಿದೆ ಪರಮಪ್ರಸಾದದ ಬೀಡು. ಆ ಬೀಡು ಕಂಡು, ಶಿವಗಣಂಗಳ ನೆರವ ಮಾಡಿಕೊಂಡು, ಪರಮಗುರು ಚೆನ್ನಬಸವಣ್ಣನ ಶ್ರೀಪಾದಾರವಿಂದವನರಿದು, ಅವರ ಕೃಪಾವಲೋಕನದಿಂದ ನಿಮ್ಮ ಶ್ರೀಪಾದವನರಿದೆ, ಕಪಿಲಸಿದ್ಧಮಲ್ಲಿನಾಥಯ್ಯಾ.