ವಚನ - 1281     
 
ಐದು ಬ್ರಹ್ಮರಲ್ಲಿ ಅಯ್ಯಾ, ನೀನು ಅತಿಶಯ ಜ್ಯೋತಿರ್ಮಯನು. ಆನಂದಸ್ಥಾನದಲ್ಲಿ ಅಯ್ಯಾ, ನೀನು ಅತಿಶಯ ನಿತ್ಯಮಯನು. ಬಾಹ್ಯಾಭ್ಯಂತರದಲ್ಲಿ ಪರಿಪೂರ್ಣನು. ನಿನ್ನಾಧಿಕ್ಯವನರಿಯಲ್ಕೆ ನಿಗಮಕ್ಕಭೇದ್ಯನು. ಗುರುವಿನ ಕರುಣದಿಂದ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದೆ ಶಿವನೇ, ಮಹಾಲಿಂಗ ಕಪಿಲಸಿದ್ಧಮಲ್ಲಿಕಾರ್ಜುನಾ.