ವಚನ - 1384     
 
ವಾಕ್ಸಿದ್ಧಿಯಿಂದ ದೋಷವುಂಟು, ವಾಕ್ಸಿದ್ಧಿಯಿಂದ ಪುಣ್ಯವುಂಟು. ದೋಷದಿಂದ ಭವಕ್ಕೆ ಬೀಜ, ಪುಣ್ಯದಿಂದ ಪದಕ್ಕೆ ಬೀಜ. ಇವೆಲ್ಲ ಪ್ರಳಯದಲ್ಲಿ, ಅನಿತ್ಯ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ.