ವಚನ - 1649     
 
ತಿಳಿದು ತಿಳಿದು ವಿಷಯಕ್ಕೆ ಮೈಗೊಟ್ಟಡೆ ಅನುಭಾವಿಯೆ, ಅಯ್ಯಾ? ಅಳಿದು ಅಳಿದು ಆನಂದಕ್ಕೆ ಮೈಗೊಟ್ಟಡೆ ಅಜ್ಞಾನಿಯೆ, ಅಯ್ಯಾ? ತಿಳಿದ ಬಳಿಕ ವಿಷಯಗಳಳಿಯಬೇಕು. ಅಳಿದ ಬಳಿಕ, ಎಳೆಯ ಚಂದ್ರಧರ ಕಪಿಲಸಿದ್ಧಮಲ್ಲಿಕಾರ್ಜುನನಾಗಲೇಬೇಕು.