ವಚನ - 1662     
 
ಪೂಜೆಯ ಪರಿಯನೊರೆವೆ ಆಲಿಸಾ ದೇವಾ: ``ಮನೋ ನಿರ್ಮಲಮಭಿಷೇಕಂ ತಸ್ಯ ನಾಹಂ ಜಡ ಇತಿ ಭಸ್ಮಧಾರಣಂ| ನಾಹಂ ಸಾಕ್ಷೀತ್ಯಮಲಬಿಲ್ವಂ ತನ್ಮಸ್ತಕೇ||" ಇಂತಪ್ಪ ಪೂಜೆಯ ಮಾಡದೆ ಮರೆದೆ. ಎಲೆಮರೆಯ ನೀರಸುಟ್ಟ ಬೂದಿಯದಂ ಪೂಜಿಸಿ, ಸಿದ್ಧಿಗಳ ಗುದ್ದಾಟಕ್ಕೊಳಗಾದವರ ಕಡೆಮೆಟ್ಟಿ ಬಿಟ್ಟಿಪ್ಪನೆ, ಬೆಟ್ಟಜೆಪತಿ ದಿಟ್ಟ ಕಪಿಲಸಿದ್ಧಮಲ್ಲಿಕಾರ್ಜುನಾ.