ವಚನ - 1720     
 
ಬಲ್ಲಿದ ಬಾಣನ ಬಾಗಿಲ ಕಾಯ್ವರವರು ಭೂತಗಳೇನಯ್ಯಾ? ಅಪ್ಪ ರೇವಣಸಿದ್ಧ ನೀರುಹೊತ್ತನೆಂಬರು; ನಮ್ಮ ನೀರು ಹೊರುವವರವರು ಕೂಲಿಕಾರರೇನಯ್ಯಾ? `ಸರ್ವೇಷಾಂ ಹೃದಿ ಸ್ಥಿತಶ್ಚಂದ್ರಮೌಲೀ' ಎಂಬ ಶ್ರುತಿವಾಕ್ಯವ ನಂಬು ನಂಬು, ಕಪಿಲಸಿದ್ಧಮಲ್ಲಿಕಾರ್ಜುನನ ಮುಂದೆ ಎಲೆ ಮನವೆ.