ವಚನ - 1727     
 
ಬಂದಯ್ಯಗಳಿಗನ್ನವ ಕೊಟ್ಟೆನೆಂಬವನ ಮುಖವ ನೋಡಲಾಗದು. ಕೊಡಲಿಕ್ಕಾತನೇನು ಅನಾದಿ ಬಸವನೊ? ತೆಗೆದುಕೊಳಲಿಕ್ಕಾತನೇನು ಅನಾದಿ ಪ್ರಭುವೊ? ಹೊಲಿದು ಬರುವುದೆಲ್ಲ ಹೊಲೆಪದಾರ್ಥ, ನಿರುಪಾಧಿಯಿಂದ ಬಂದ ಪದಾರ್ಥ ಶಿವಪ್ರಸಾದ. ಆ ಪ್ರಸಾದವೆ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಂಗೆ ಮಹಾ ಆರೋಗಣೆಯಾಯಿತ್ತು!